ಈ ವಿಡಿಯೊ ಬಗ್ಗೆ ಸೇನೆಯೇ ಸ್ಪಷ್ಟೀಕರಣ ನೀಡಿದೆ. ಇದು ಸೆ. 27ರಂದು ಭಾರತ್ ಬಂದ್ನಂದು ಚಿತ್ರೀಕರಿಸಿದ ವಿಡಿಯೊ. ದೈನದಿಂದ ಕಾರ್ಯಾಚರಣೆಯ ಭಾಗವಾಗಿ, 20 ಸೇನಾ ವಾಹನಗಳು ಕಪುರ್ತಲಾದಿಂದ ಬೀರ್ ಸಾರಂಗ್ವಾಲ್ ಕಡೆಗೆ ಸಂಚರಿಸುತ್ತಿದ್ದವು. ಅಂದರೆ, ಗಡಿಯೊಳಗೇ ಪ್ರಯಾಣಿಸುತ್ತಿದ್ದವು. ಮಾರ್ಗಮಧ್ಯೆ, ‘ಜಲಂಧರ್ ಸಮೀಪ ಬೆಂಗಾವಲು ವಾಹನದಲ್ಲಿದ್ದ ಸಿಬ್ಬಂದಿ ಹಾಗೂ ರೈತರ ನಡುವೆ 20 ನಿಮಿಷ ಚರ್ಚೆ ನಡೆಯಿತು. ರೈತರು ವಿನಯಶೀಲರಾಗಿದ್ದರು ಮತ್ತು ನಿರ್ಗಮಿಸುವಾಗ ಕೈಕುಲುಕಿದರು. ಆದರೆ ಈ ದೃಶ್ಯವನ್ನು ವೈರಲ್ ವೀಡಿಯೊದಲ್ಲಿ ತೋರಿಸಲಾಗಿಲ್ಲ’ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈತರ ಪ್ರತಿಭಟನೆಗೆ ಮಸಿ ಬಳಿಯಲು ಮಾಡಿದ ಮತ್ತೊಂದು ಯತ್ನವಿದು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.