ಮುಂದುವರಿದು, ಮುಂದಿನ ತಿಂಗಳು ದೀಪಾವಳಿ ಆಚರಣೆ ವೇಳೆ ಜನರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮತ್ತು ಮಾನವೀಯತೆಯ ವೈರಿಗಳಿಂದ ಪ್ರಾಣ ಕಳೆದುಕೊಂಡ ಯೋಧರಿಗಾಗಿ ಒಂದು ದೀಪ ಬೆಳಗಬೇಕು ಎಂದು ಕರೆ ನೀಡಿದ್ದಾರೆ. ʼಭಯೋತ್ಪಾದನೆ ಮತ್ತು ಅದರ ಸಂಪೂರ್ಣ ವ್ಯವಸ್ಥೆಯನ್ನು ಕಿತ್ತುಹಾಕಲಾಗುವುದೆಂದು ನಾನು ನಿಮಗೆ ಭರವಸೆ ನೀಡುತ್ತೇನೆʼ ಎಂದೂ ಹೇಳಿದ್ದಾರೆ.