ಪರ್ರೀಕರ್ ಅವರ ಮಗ ಉತ್ಪಲ್ ಅವರಿಗೆ ಪಣಜಿ ಟಿಕೆಟ್ ನಿರಾಕರಿಸಿರುವ ಬಿಜೆಪಿ, ಬಿಜೆಪಿಗೆ ಸೇರ್ಪಡೆಯಾಗಿರುವ ಅಟನಾಸಿಯೊ 'ಬಾಬುಷ್' ಮಾನ್ಸೆರಟೆ ಅವರಿಗೆ ಟಿಕೆಟ್ ಕೊಟ್ಟಿದೆ. ಮನೋಹರ್ ಪರ್ರೀಕರ್ ಅವರು 1994ರಿಂದ 2019ರ ಮಾರ್ಚ್ ವರೆಗೂ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2019ರ ಜುಲೈನಲ್ಲಿ ಕಾಂಗ್ರೆಸ್ನ 10 ಶಾಸಕರು ಬಿಜೆಪಿಗೆ ಬೆಂಬಲ ನೀಡುವಂತೆ ಮಾಡುವಲ್ಲಿ ಕಾಂಗ್ರೆಸ್ ಮಾಜಿ ಮುಖಂಡ ಅಟನಾಸಿಯೊ ಪ್ರಮುಖ ಪಾತ್ರವಹಿಸಿದ್ದರು.