ಆಶೀರ್ವಚನ ನೀಡಿದ ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ‘ಬನ್ನಿ ಮುಡಿಯುವ ಹಬ್ಬ ಜನರ ಬದುಕಿನ ಬಾಂಧವ್ಯದ ಬೆಸುಗೆ. ಪರಿಸರ ರಕ್ಷಣೆಯ ಸಂಕೇತವಾಗಿದ್ದು, ಹಸುರಿನ ಮಹತ್ವ ಸಾರುವ ಹಬ್ಬ. ಬನ್ನಿ ಗಿಡವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ರಾಗ, ದ್ವೇಷ, ಅಸೂಯೆಗಳನ್ನು ಮರೆತು ಮಾನವೀಯ ಸಂಬಂಧಗಳು ಪರಿಪಕ್ವಗೊಳ್ಳಲು ಸಹಾಯಕವಾಗುತ್ತದೆ. ಸ್ನೇಹ, ಪ್ರೀತಿ, ಬಾಂಧವ್ಯ ಉಳಿಸಿಕೊಳ್ಳುವ ಸಂದೇಶ ಸಾರುವ ಹಬ್ಬ ಇದು’ ಎಂದು ಹೇಳಿದರು.