ನವದೆಹಲಿ, ಜ. 16– ಮೈಸೂರು ಪ್ರದೇಶ ಆಡಳಿತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ. ದೇವರಾಜ ಅರಸು ಮತ್ತು ಇತರ ಅಧಿಕಾರ ವರ್ಗದವರು ಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಇವರುಗಳನ್ನು ಸಂಸ್ಥೆಯ ಅಧಿಕಾರ ಸ್ಥಾನದಿಂದ ತೆಗೆದು ಅವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡುವಂತೆ ನಾಳೆ ಮೈಸೂರು ಪ್ರದೇಶ ಚುನಾವಣೆ ಸಮಿತಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ಒತ್ತಾಯಪಡಿಸುವ ಸಂಭವವಿದೆ.