ವಶಪಡಿಸಿಕೊಂಡಿರುವ ಪ್ರದೇಶವನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸಿದರೆ ರಾಷ್ಟ್ರಾದ್ಯಂತ ಚಳವಳಿ ನಡೆಸುವುದಾಗಿ ಜನಸಂಘದ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಅವರಿತ್ತಿರುವ ಬೆದರಿಕೆ ಬಗ್ಗೆ ಜಗಜೀವನರಾಂ ಅವರು ಟೀಕಿಸುತ್ತಾ, ‘ನಾವು ಅಷ್ಟು ಮೂರ್ಖರಲ್ಲ. ಬರೀ ಮಾತನಾಡುವವರಿಗಿಂತ ದೇಶಕ್ಕಾಗಿ ತ್ಯಾಗ ಮಾಡಿರುವವರಿಗೆ ನೋವು ಹೆಚ್ಚು’ ಎಂದು ಹೇಳಿದರು.