ಕೈಲಾಸ ನಗರ, ಅ. 10– ಸರ್ಕಾರಿ ವ್ಯಾಪ್ತಿಗೆ ಸೇರಿದ ಕಾರ್ಖಾನೆಗಳಲ್ಲಿ ಕಾರ್ಯವಿಧಾನ ಗಳನ್ನು ಪರಿಣಾಮಕರವಾಗಿ ಸುಧಾರಿಸುವಂತೆ ಮಾಡಲು ಸರ್ಕಾರವು ಶೀಘ್ರವೇ ಉನ್ನತಾಧಿ ಕಾರ ಸಮಿತಿಯೊಂದನ್ನು ನೇಮಿಸುವುದು.
ಆಡಳಿತ ಕ್ರಮದಲ್ಲಿ ಸುಧಾರಣೆ, ಕಾರ್ಮಿಕರ ಪಾತ್ರ, ಅವರಿಗೆ ನೀಡುವ ಪ್ರೋತ್ಸಾಹ ಹಾಗೂ ದರ ನಿಗದಿ ನೀತಿಗಳ ಕುರಿತು ಈ ಸಮಿತಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸುವುದು.
ಕೂಡಲಿ ಶೃಂಗೇರಿ ಮಠದ ನೂತನ ಪೀಠಾಧೀಶರಿಂದ ಅಧಿಕಾರ ಸ್ವೀಕಾರ
ಮೈಸೂರು, ಅ. 10– ಕೂಡಲಿ ಶೃಂಗೇರಿ ಮಠದ ನೂತನ ಪೀಠಾಧಿಪತಿಗಳಾಗಿಶ್ರೀವಿದ್ಯಾಭಿನವ ನರಸಿಂಹ ಭಾರತಿ ಸ್ವಾಮಿಗಳು (ಗೌರೀಪುರದ ಶ್ರೀ ಚಿಂತಾಮಣಿ ಸ್ವಾಮಿಗಳು) ಇಂದು ಇಲ್ಲಿ ಅಧಿಕಾರ ವಹಿಸಿ ಕೊಂಡರು.
ಕೂಡಲಿ ಶೃಂಗೇರಿ ಪೀಠಾಧೀಶರಾಗಿದ್ದ ಶ್ರೀ ಶಂಕರ ಭಾರತಿ ಸ್ವಾಮಿಗಳು ನಿಧನರಾದ ನಂತರ, 11 ತಿಂಗಳಿಂದ ಪೀಠಾಧೀಶರ ಸ್ಥಾನ ತೆರವಾಗಿ ಉಳಿದಿತ್ತು.