ಮಧುರೆ, ಅ. 11– ಧೋತ್ರ, ಅಂಗಿ ಹಾಕುವು ದನ್ನು ತ್ಯಜಿಸಿ, ಅಂದಿನ ಭಾರತದ ಬಡತನ ಪ್ರತಿಬಿಂಬಿಸಲು ತುಂಡು ಪಂಚೆಯನ್ನು ಮಾತ್ರವೇ ಇನ್ನು ಮುಂದೆ ಧರಿಸಬೇಕೆಂಬ ಐತಿಹಾಸಿಕ ನಿರ್ಧಾರವನ್ನು 1921ರಲ್ಲಿ ರಾಷ್ಟ್ರಪಿತ ಗಾಂಧೀಜಿ ಅವರು ತೆಗೆದುಕೊಂಡ ಇಲ್ಲಿನ ಕಟ್ಟಡದಲ್ಲಿ ಈಗ ಸಾರಾಯಿ ಅಂಗಡಿ ತೆರೆಯಲಾಗಿದೆ ಎಂಬ ದೂರನ್ನು ತನಿಖೆಗೆ ಒಪ್ಪಿಸಿರುವುದಾಗಿ ಮಧುರೆಯ ಜಿಲ್ಲಾ ಕಲೆಕ್ಟರರು ಇಂದು ತಿಳಿಸಿದರು.