×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಭಾನುವಾರ 17–10–1971

Published : 16 ಅಕ್ಟೋಬರ್ 2021, 19:31 IST
ಫಾಲೋ ಮಾಡಿ
Comments

ಸ್ವದೇಶಕ್ಕೆ ಯಹ್ಯಾರ ಹಠಾತ್ ವಾಪಸು: ದೆಹಲಿಯ ಕಳವಳ

ನವದೆಹಲಿ, ಅ. 16– ಭಾರತದ ಗಡಿಗಳಲ್ಲಿ ಪಾಕಿಸ್ತಾನಿ ಸೈನ್ಯದ ಭಾರಿ ಜಮಾವಣೆ ಜೊತೆಗೆ ಯಹ್ಯಾಖಾನರು ತಮ್ಮ ಟೆಹರಾನ್‌ ಭೇಟಿಯನ್ನು ಒಂದು ದಿನ ಮೊಟಕುಗೊಳಿಸಿ ಇಸ್ಲಾಮಾಬಾದಿಗೆ ಹಿಂದಿರುಗಿರುವುದು ಪಾಕಿಸ್ತಾನಿ ಉದ್ದೇಶಗಳ ಬಗೆಗೆ ಇಲ್ಲಿ ತೀವ್ರ ಕಳವಳಕ್ಕೆ ಎಡೆಕೊಟ್ಟಿದೆ.

ಕಳೆದ ಕೆಲವು ವಾರಗಳಿಂದ ಪಾಕಿಸ್ತಾನದ ಸೈನ್ಯ ಜಮಾಯಿಸುತ್ತಿದೆ. ಯಹ್ಯಾ ಖಾನರೇ ಯುದ್ಧೋನ್ಮಾದ ಪ್ರಚೋದಿಸುತ್ತಿದ್ದಾರೆ ಗಡಿ ಗ್ರಾಮಗಳಲ್ಲಿ ನಾಗರಿಕರನ್ನು ಸ್ಥಳಾಂತರಿಸಿ ಕಾಶ್ಮೀರದಿಂದ ರಾಜಸ್ಥಾನದವರೆಗೆ ಕಂದಕಗಳನ್ನು ತೋಡಲಾಗಿದೆ.

ಭಾರತದ ಕಡೆಯ ಗಡಿಯಲ್ಲಿ ಮಾತ್ರ ಹೆದರಿಗೆ ಹುಟ್ಟಿಲ್ಲ. ಗ್ರಾಮಗಳಲ್ಲಿ ಜನಜೀವನ ಎಂದಿನಂತಿದೆ. ಆದರೆ ಪಾಕಿಸ್ತಾನದ ಬೆದರಿಕೆ ಎದುರಿಸಲು ಭಾರತವೂ ಪರಿಣಾಮಕಾರಕವಾಗಿ ಸಿದ್ಧತೆ ಮಾಡಿಕೊಂಡಿದೆ. ಗಡಿ ಪ್ರದೇಶಗಳಲ್ಲಿ ಭಾರಿ ಬಿಕ್ಕಟ್ಟಿದೆ. ಇಂದು ಪಶ್ಚಿಮ ವಲಯದಲ್ಲಿ ಘರ್ಷಣೆಗಳೇನೂ ಸಂಭವಿಸಲಿಲ್ಲ.

ಭಾರತದ ಗಡಿಗಳಲ್ಲಿ ಪಾಕಿಸ್ತಾನಿ ಸೈನ್ಯದ ಭಾರಿ ಜಮಾವಣೆ ಜೊತೆಗೆ ಯಹ್ಯಾಖಾನರು ತಮ್ಮ ಟೆಹರಾನ್‌ ಭೇಟಿಯನ್ನು ಒಂದು ದಿನ ಮೊಟಕುಗೊಳಿಸಿ ಇಸ್ಲಾಮಾಬಾದಿಗೆ ಹಿಂದಿರುಗಿರುವುದು ಪಾಕಿಸ್ತಾನಿ ಉದ್ದೇಶಗಳ ಬಗೆಗೆ ಇಲ್ಲಿ ತೀವ್ರ ಕಳವಳಕ್ಕೆ ಎಡೆಕೊಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT