×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಗುರುವಾರ 14.10.1971

Published : 13 ಅಕ್ಟೋಬರ್ 2021, 19:30 IST
ಫಾಲೋ ಮಾಡಿ
Comments

ಬೆಳಗಾವಿ ಸಮ್ಮೇಳನದಲ್ಲಿ ಘರ್ಷಣೆ, ಗೊಂದಲ

ಬೆಳಗಾವಿ, ಅ. 13– ಎರಡು ಗುಂಪುಗಳ ನಡುವೆ ನೇರ ಘರ್ಷಣೆ, ಘೋಷಣೆ, ಕೂಗಾಟ ಹಾಗೂ ಕೈಕೈ ಮಿಲಾಯಿಸಿ ಇಂದು ಮೈಸೂರು ಪ್ರದೇಶ ಆಡಳಿತ ಕಾಂಗ್ರೆಸ್ಸಿನ ರಾಜಕೀಯ ಸಮ್ಮೇಳನದಲ್ಲಿ ಸುಮಾರು ತೊಂಬತ್ತು ನಿಮಿಷ ತೀವ್ರ ಗೊಂದಲ ಉಂಟಾಯಿತು.

ಹಲವರಿಗೆ ಹೊಡೆತ ಬಿದ್ದು ತಳ್ಳಾಟ ಪ್ರಾರಂಭವಾದಾಗ ಪೊಲೀಸರು ಚಪ್ಪರಕ್ಕೆ ಪ್ರವೇಶಿಸಿ ಕೆಲವರನ್ನು ಓಡಿಸಿದರು.

ಗುಂಪು ಹತೋಟಿಗೆ ಬರದಿದ್ದಾಗ ಲಘು ಲಾಠಿ ಪ್ರಹಾರ ನಡೆಯಿತು.

ನಿನ್ನೆ ಮತ್ತು ಇಂದು ಬೆಳಿಗ್ಗೆ ಸುಸೂತ್ರವಾಗಿ ಸಾಗಿದ ಸಮ್ಮೇಳನದಲ್ಲಿ ನಿರ್ಣಯವೊಂದು ಆಸ್ಫೋಟನಕ್ಕೆ ಕಾರಣವಾಯಿತು.

ಮಧ್ಯದಲ್ಲಿ ಕೆಲವರು ಮಹಾಜನ್ ವರದಿ ಕಾರ್ಯಗತ ವಾಗಬೇಕೆಂದು ಘೋಷಣೆ ಕೂಗಿದರು. ವಿದ್ಯಾರ್ಥಿಗಳೂ ಘೋಷಣೆ ಹಾಕಲು ಆರಂಭಿಸಿದರು.

ಮಧ್ಯೆ ‘ಕರ್ನಾಟಕ’ ಹೆಸರಿನ ಬಗೆಗೆ ಕೂಗಾಟ ನಡೆಯಿತು. ಈ ರೀತಿ ನಾನಾ ವರ್ಗಗಳ ಮಿಶ್ರಣ ಹಲವಾರು ಬಾರಿ ಗೊಂದಲ ಮಾಡಿತು.

ಬೆಳಗಾವಿ ಸಮ್ಮೇಳನದಲ್ಲಿ ಘರ್ಷಣೆ, ಗೊಂದಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT