‘ಕಂದಾಯ ಇಲಾಖೆಯ ಕಂದಾಯ ವಸೂಲಿ ಕಚೇರಿಗಳಲ್ಲಿ 200ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ, ಅವರಿಗೆ ಅಂತಹ ಕೆಲಸಗಳಿರುವುದಿಲ್ಲ. ಆ ಹುದ್ದೆಗಳನ್ನು ರದ್ದು ಮಾಡಿ ಸಿಬ್ಬಂದಿಯನ್ನು ಡಿ.ಸಿ ಕಚೇರಿ, ತಹಶೀಲ್ದಾರ್ ಕಚೇರಿಗಳಿಗೆ ವರ್ಗಾವಣೆ ಮಾಡಲಾಗುವುದು. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೂ ಹೆಚ್ಚು ಕೆಲಸಗಳಾಗುತ್ತಿಲ್ಲ. ಹೀಗಾಗಿ ರಾಜ್ಯಕ್ಕೆ ಒಂದೇ ಕಚೇರಿ ರೂಪಿಸುವ ಚಿಂತನೆ ಇದೆ’ ಎಂದರು.