ಶನಿವಾರ ಬಿಜೆಪಿ ರಾಜ್ಯ ಘಟಕದ ಕಚೇರಿಗೆ ಭೇಟಿ ನೀಡಿದ ಸೋಮಣ್ಣ, ಅಲ್ಲಿ ಬಹಿರಂಗವಾಗಿಯೇ ಅಶೋಕ ವಿರುದ್ಧ ಅಸಮಾಧಾನ ಹೊರಹಾಕಿದ್ದಲ್ಲದೇ, ಬೆಂಗಳೂರು ನಗರದ ಉಸ್ತುವಾರಿಯ ಸ್ಪರ್ಧೆಯಲ್ಲಿರುವುದಾಗಿಯೂ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಅಶೋಕ, ತಾವು ಬೆಂಗಳೂರು ಉಸ್ತುವಾರಿ ಬಯಸಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ.