‘ಕೇರಳದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗಲೆಲ್ಲ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಉದ್ದೇಶದ 2011ರ ಮಾಧವ ಗಾಡ್ಗೀಳ್ ನೇತೃತ್ವದ ಪರಿಸರ ತಜ್ಞರ ಸಮಿತಿಯ ವರದಿ ನೆನಪಾಗುತ್ತದೆ. ಒಂದು ದಶಕದ ನಂತರವೂ, 2018 ಮತ್ತು 2020ರ ವಿನಾಶಕಾರಿ ಪ್ರವಾಹಗಳ ಹೊರತಾಗಿಯೂ ವರದಿ ಜಾರಿಯಾಗಿಲ್ಲ,’ ಎಂದು ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.