ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿರುವ ಠಾಕೂರ್, 'ನೀವು ಶಾಸಕ ನಹೀದ್ ಹಸನ್ (ಕೈರಾನ ಕ್ಷೇತ್ರದ ಎಸ್ಪಿ ಅಭ್ಯರ್ಥಿ) ಅವರನ್ನು ನೋಡಿ. ಅವರು ಎಸ್ಪಿ ಪಟ್ಟಿಯಲ್ಲಿರುವ ಮೊದಲ ಅಭ್ಯರ್ಥಿ. ಇದೀಗ ಅವರು ಜೈಲಿನಲ್ಲಿದ್ದಾರೆ. ಎರಡನೇ ಅಭ್ಯರ್ಥಿ ಶಾಸಕ ಎಬ್ದುಲ್ಲಾ ಅಜಂ, ಜಾಮೀನನ ಮೇಲೆ ಹೊರಗಿದ್ದಾರೆ. ನೀವು ಎಸ್ಪಿಯ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದರೆ, ಅದು ಜೈಲಿನಲ್ಲಿರುವರಿಂದ ಆರಂಭವಾಗಿ, ಜಾಮೀನಿನ ಮೇಲೆ ಹೊರಗಿರುವವರಿಂದ ಕೊನೆಗೊಳ್ಳುತ್ತದೆ. ಜೈಲು-ಜಾಮೀನಿನೊಂದಿಗಿನ ಆಟವೇ ಸಮಾಜವಾದಿ ಪಕ್ಷದ ನಿಜವಾದ ಆಟʼ ಎಂದು ಆರೋಪಿಸಿದ್ದಾರೆ.