ತ್ರಿಪುರಾದ ಕೊನೆಯ ರಾಜ, ಮಹಾರಾಜ ವೀರ ವೀಕ್ರಂ ಕಿಶೋರ್ ಮಾಣಿಕ್ಯ ಬಹದ್ದೂರ್ ಅವರು ವಿಭಜನೆಯ ನಂತರ ತ್ರಿಪುರಾವನ್ನು ಭಾರತಕ್ಕೆ ಸೇರಿಸಲು ನಿರ್ಧರಿಸಿದರು. ವಿಭಜನೆಯ ನಂತರ ಮುಸ್ಲಿಮ್ ನುಸುಳುಕೋರರು ತ್ರಿಪುರಾವನ್ನು ಪ್ರವೇಶಿಸುತ್ತಿದ್ದಾಗ, ಮಹಾರಾಣಿ ಕಾಂಚನಪ್ರವಾ ದೇವಿ ಅವರು ಅಂದಿನ ಕೇಂದ್ರ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸಂಪರ್ಕಿಸಿದ್ದರು. ಮಹಾರಾಜರ ಕೊಡುಗೆಯನ್ನು ಗೌರವಿಸಲು ಮೋದಿ ಸರ್ಕಾರವು ತನ್ನ ನೀತಿಯನ್ನು ಬದಲಾಯಿಸಿ ಅಗರ್ತಲಾ ವಿಮಾನ ನಿಲ್ದಾಣಕ್ಕೆ ಹೆಸರನ್ನು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು.