‘ಜತೆಗೇ ಇದ್ದ ರವೀನಾ ಅವರ ತಂದೆ ಚಿರತೆಗೆ ದೊಣ್ಣೆಯಿಂದ ಹೊಡೆದು ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಆಗ ಚಿರತೆ ಅವರ ಮೇಲೆ ಸಹ ದಾಳಿ ಮಾಡಿದೆ. ಸುತ್ತಮುತ್ತಲಿನ ಜನ ಘಟನಾ ಸ್ಥಳದಲ್ಲಿ ಸೇರುತ್ತಿದ್ದಂತೆ ಚಿರತೆಯು ಬಾಲಕಿಯ ದೇಹವನ್ನು ಅಲ್ಲಿಯೇ ಬಿಟ್ಟು, ಓಡಿ ಹೋಯಿತು’ ಎಂದು ಅವರು ಮಾಹಿತಿ ನೀಡಿದರು.