ಡಿಸಿಪಿ (ಮಹಿಳಾ ಮತ್ತು ಮಕ್ಕಳ ಸುರಕ್ಷತೆ ವಿಭಾಗ) ವೃಂದಾ ಶುಕ್ಲಾ, ‘ಭಾನುವಾರ ಬೆಳಿಗ್ಗೆ 9.30 ಯಿಂದ 10.30 ಗಂಟೆಯೊಳಗೆ ಗ್ರಾಮದ ಸಮೀಪದ ಬಯಲು ಪ್ರದೇಶದಲ್ಲಿ ಈ ದುಷ್ಕೃತ್ಯ ನಡೆದಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಹಳ್ಳಿಯವರಾಗಿದ್ದು, ಪರಸ್ಪರ ಪರಿಚಿತರು. ಜಾನುವಾರುಗಳಿಗೆ ಮೇವು ತರಲು ಮತ್ತು ಅವುಗಳನ್ನು ಮೇಯಿಸಲು ಇಬ್ಬರೂ ಪ್ರತಿ ನಿತ್ಯ ಈ ಜಾಗಕ್ಕೆ ಬರುತ್ತಿದ್ದರು‘ ಎಂದು ಹೇಳಿದ್ದಾರೆ.