ಬೆಂಗಳೂರು: ಕಳೆದ ಚುನಾವಣೆಯ ವೇಳೆ ಬಿಜೆಪಿ ನೀಡಿದ್ದ 600 ಕ್ಕೂ ಹೆಚ್ಚಿನ ಭರವಸೆಗಳಲ್ಲಿ ಶೇಕಡಾ 90 ರಷ್ಟು ಭರವಸೆಗಳು ಚರ್ಚೆಗೂ ಬರದೇ ಈಗಾಗಲೇ ಸಮಾಧಿ ಸೇರಿವೆ. ಬಿಜೆಪಿಯ ಸುಳ್ಳಿನ ಭರವಸೆಗಳ ಆತ್ಮಕ್ಕೆ ಎಂದೂ ಶಾಂತಿ ಸಿಗದಿರಲಿ. ಬಿಜೆಪಿಗರ ವಚನ ವಂಚನೆ ಅವರನ್ನು ಕಾಡುತ್ತಲೇ ಇರಲಿ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ರೈತರಿಗೆ ಸಾಲಮನ್ನಾ, ಬೆಂಬಲ ಬೆಲೆ, ಮಹಿಳೆಯರಿಗೆ ₹10,000 ಕೋಟಿಯ ಸ್ತ್ರೀ ಉನ್ನತಿ ನಿಧಿ ಹೀಗೆ 600 ಕ್ಕೂ ಹೆಚ್ಚು ಸುಳ್ಳು ಭರವಸೆಗಳನ್ನು ಕಳೆದ ಚುನಾವಣೆಯ ವೇಳೆ ಬಿಜೆಪಿ ನೀಡಿದೆ. ಬಿಜೆಪಿಗರೇ, ನಿಮ್ಮ ಸುಳ್ಳು ಭರವಸೆಗಳ ಕುರಿತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ, ನಿಮ್ಮ ಹತ್ತಿರ ಉತ್ತರವಿದೆಯೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.