ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಾಯ ಬಂದೊದಗಿದ್ದು, ದೇಶ ನಿರಂಕುಶ ಪ್ರಭುತ್ವದತ್ತ ಸಾಗುತ್ತಿದೆ‘ ಎಂದು ಕಳವಳ ವ್ಯಕ್ತಪಡಿಸಿ ಎಂಟು ವಿರೋಧ ಪಕ್ಷಗಳು ಪ್ರಧಾನಿಗೆ ಪತ್ರ ಬರೆದ ವಿಷಯ ನಮ್ಮಲ್ಲಿ, ಪ್ರಮುಖ ಇಂಗ್ಲಿಷ್ ಪತ್ರಿಕೆಗಳಲ್ಲಿ ಲೀಡ್ ಆಗಿದೆ. ಕೆಲವು ಕನ್ನಡ ಪತ್ರಿಕೆಗಳೂ ಈ ಸುದ್ದಿಗೆ ಮುಖಪಟದಲ್ಲಿ ಆದ್ಯತೆ ನೀಡಿವೆ.
* ಲಂಚ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇನ್ನೂ ಪತ್ತೆಯಾಗಿಲ್ಲ ಎಂಬ ವರದಿಯ ಫಾಲೊಅಪ್ ನಮ್ಮಲ್ಲಿದೆ. ಅವರು ಪತ್ತೆಯಾಗದ ಕಾರಣ ಲೋಕಾಯುಕ್ತ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ ಎಂಬುದನ್ನು ವಿ.ಕ., ಉದಯವಾಣಿ ಹೈಲೈಟ್ ಮಾಡಿವೆ. ಆದರೆ ಈ ರೀತಿಯ ಬೆಳವಣಿಗೆ ನಡೆದಿಲ್ಲ ಎನ್ನುವ ಕಾರಣ ನಮ್ಮಲ್ಲಿ ಆ ಅಂಶ ಬರೆದಿಲ್ಲ. ಅವರ ಹಿರಿಯ ಮಗ ಮಲ್ಲಿಕಾರ್ಜುನ ಮಾಡಾಳ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂಬ ಮಾಹಿತಿ ವಿಜಯ ಕರ್ನಾಟಕದಲ್ಲಿದೆ. ಇದು ನಮ್ಮಲ್ಲಿಲ್ಲ.