ಅಧಿಕಾರಿಗಳು, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರ ಜತೆ ಸೋಮವಾರ ಕೆರೆಯ ಸ್ಥಿತಿಗತಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ‘ಕಸ್ತೂರಬಾ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಈ ಕೆರೆ ಜಲಪಾತ್ರೆ ಎನಿಸಿದೆ. ಈಚಿನ ವರ್ಷದಲ್ಲಿ ಒತ್ತುವರಿ, ನಿರ್ವಹಣೆಯ ಕೊರತೆ ಕಾರಣಕ್ಕೆ ಕೆರೆ ಸೊರಗಿದೆ’ ಎಂದರು.