ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರು ಮತ್ತು ಜಟಾಯುವಿನ ಸ್ತಬ್ಧಚಿತ್ರವನ್ನು ಸಿದ್ಧಪಡಿಸುವುದಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ರಕ್ಷಣಾ ಇಲಾಖೆಯು ಅದನ್ನು ತಿರಸ್ಕರಿಸಿ ಆದಿಶಂಕರರ ಸ್ತಬ್ಧಚಿತ್ರ ಸಿದ್ಧಪಡಿಸಬೇಕು. ಅದು ಆಗದಿದ್ದರೆ ಅರ್ಜಿಯನ್ನೇ ಹಿಂಪಡೆಯಿರಿ ಎಂದು ಸೂಚಿಸಿದೆ. ಕೇಂದ್ರ ಸರ್ಕಾರವು ಜಾತಿಗಳ ನಡುವೆ ಜಗಳ ತಂದಿಟ್ಟಿದೆ. ನಮಗೆ ಆದಿಶಂಕರರ ಬಗ್ಗೆ ಬಹಳ ಗೌರವವಿದೆ. ಅವರು ಅದ್ವೈತ ವಾದಿಯಾಗಿದ್ದರು. ಆದರೆ, ನಾರಾಯಣ ಗುರುಗಳು ಆ ತತ್ವದಲ್ಲೇ ಜೀವಿಸಿದರು’ ಎಂದು ಹೇಳಿದರು.