ಮಾದನ ಹಿಪ್ಪರಗಿ ಸುತ್ತಲಿನ ಗ್ರಾಮಸ್ಥರು ಸಹ ಕಾರಣಿಕೋತ್ಸವದಲ್ಲಿ ಪಾಲ್ಗೋಳಲು ನಡುರಾತ್ರಿಯಲ್ಲಿ ಗ್ರಾಮಕ್ಕೆ ಬಂದಿದ್ದರು. ಗ್ರಾಮದ ಮುಖ್ಯಬೀದಿಗಳಲ್ಲಿ ವೈಭವದಿಂದ ನಡೆದ ದೀವಟಗಿ ಮೆರವಣಿಗೆಗೆ ಹಲಗೆ, ಡೊಳ್ಳು ಕುಣಿತ ಹಾಗೂ ಭಾಜಾ ಭಜಂತ್ರಿಯ ವಾದ್ಯಗಳು ಕಳೆ ಕಟ್ಟಿದವು. ಖಂಡೇರಾವ ದೇವಸ್ಥಾನದಲ್ಲಿ ಅರಳು ಹುರಿಯುವ ಆಚರಣೆಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಕೈಗೊಂಡರು.