‘ಶುಕ್ರವಾರ ನಗರಕ್ಕೆ ಆಗಮಿಸಿದ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಘಟನಾ ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಒಂದು ಹಂತದ ಶೋಧ ಕಾರ್ಯ ಮುಗಿದಿದ್ದು, ಇತರ ಯಾವುದೇ ಅಪಾಯಕಾರಿ ವಸ್ತುಗಳು ಸಿಕ್ಕಿಲ್ಲ. ಈ ಹ್ಯಾಂಡ್ ಗ್ರನೇಡ್ ಮಾದರಿ ಇಲ್ಲಿಗೆ ಬರಲು ಕಾರಣವೇನು? ಯಾವ ಉದ್ದೇಶಕ್ಕೆ ತರಲಾಗಿತ್ತು? ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಮಂತರಾಯ ತಿಳಿಸಿದರು.