ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್ಮನ್ ಶ್ರೇಯಸ್ ಮುರ್ಡೇಶ್ವರ (155, 150ಎಸೆತ, 25ಬೌಂಡರಿ) ಶತಕ ಹಾಗೂ ಸಂತೋಷ ಲಮಾಣಿ (23ಕ್ಕೆ6) ಚುರುಕಿನ ಬೌಲಿಂಗ್ ಬಲದಿಂದ ಧಾರವಾಡದ ಸಿಸಿಕೆ ‘ಬಿ’ ತಂಡ, ಕೆಎಸ್ಸಿಎ ಎರಡನೇ ಡಿವಿಷನ್ ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ 219 ರನ್ಗಳ ಭರ್ಜರಿ ಗೆಲುವು ಪಡೆಯಿತು.