ಪರಿಶಿಷ್ಟ ಸಮುದಾಯದ ನಾರಾಯಣಮ್ಮ ಅವರು ಪಡಿತರವನ್ನು ಪಡೆಯಲು ಹೋಗಿದ್ದರು. ಈ ವೇಳೆ ಪದ್ಮಾವತಮ್ಮ, ನಾರಾಯಣಮ್ಮ ಅವರನ್ನು ಜಾತಿನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ನಾರಾಯಣಮ್ಮ ಅವರ ಪುತ್ರ ಆಕ್ರೋಶ ವ್ಯಕ್ತಪಡಿಸಿ ವಿಡಿಯೊ ಸಹ ಮಾಡಿದ್ದರು. ಆ ವಿಡಿಯೊ ವೈರಲ್ ಆಗಿತ್ತು. ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು.