ಬೆಂಗಳೂರು: ಲಾಲ್ಬಾಗ್ನ ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ‘ಗೊಂಬೆ ಹೇಳುತೈತೆ ನೀನೇ ರಾಜ್ಕುಮಾರ..’ ಹಾಡು. ಲಕ್ಷಾಂತರ ಪುಷ್ಪಗಳಲ್ಲಿ ಮೈದಳೆದ ಗಾಜನೂರಿನ ಮನೆ ಮುಂದೆ ಮಯೂರ ಚಿತ್ರದ ಡಾ.ರಾಜ್, ಪುನೀತ್ ರಾಜ್ಕುಮಾರ್ ಅವರ ನಗು ಮುಖದ ಪ್ರತಿಮೆಗಳು. ಪುನೀತ್ ಅಗಲಿಕೆಯ ನೋವಿನ ತಂತಿಯನ್ನು ಇವು ಮೀಟುತ್ತವೆ. ನೋಡುಗರು ಸಹಜವಾಗಿಯೇ ಭಾವುಕರಾಗುತ್ತಾರೆ.