‘ಸಮಸ್ಯೆಯ ಗಂಭೀರತೆಯನ್ನು ವ್ಯಂಗ್ಯವಾಗಿ ಎತ್ತಿ ತೋರಿಸಲು ಪೂಜೆ ಮಾಡಲಾಗಿದೆ. ಆಯುಧ ಪೂಜೆ ದಿನ ಸಾಂಪ್ರದಾಯಿಕವಾಗಿ ಯಂತ್ರಗಳನ್ನು ಪೂಜಿಸುವುದು ಸಾಮಾನ್ಯ. ಆದರೆ, ಈ ಬಾರಿ, ರಸ್ತೆ ಗುಂಡಿಗಳ ಅಮ್ಮನನ್ನು ಪೂಜಿಸಿದ್ದೇವೆ. ನಾಗರಿಕರ ಯಾವುದೇ ಜೀವವನ್ನು ತೆಗೆದುಕೊಳ್ಳಬೇಡ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇವೆ’ ಎಂದು ಹೇಳಿದರು.