ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಈ ಬಾರಿ ಭರ್ಜರಿ ಗೆಲುವು ಸಾಧಿಸಿದೆ. ಕ್ಷೇತ್ರದಲ್ಲಿ ಈ ವರೆಗೆ ಬಿಜೆಪಿ ಪಾಲಾಗುತ್ತಿದ್ದ ಲಿಂಗಾಯತ ಮತಗಳನ್ನು ಕೈ ಅಭ್ಯರ್ಥಿ ಸೆಳೆದುಕೊಂಡಿದ್ದಾರೆ. ಬಿಜೆಪಿಗರ ಅತಿಯಾದ ವಿಶ್ವಾಸ, ಸುಖಾಸುಮ್ಮನೆ ನಾಲಿಗೆ ಹರಿಬಿಟ್ಟಿದ್ದು ಹಾಗೂ ಬಿಜೆಪಿ ಪಕ್ಷದ ಒಳಗಿನ ಆಂತರಿಕ ಬೇಗುದಿಯೂ ಸಹ ಪ್ರಬಲ ನಾಯಕರಿಗೆ ದೊಡ್ಡ ಪೆಟ್ಟು ನೀಡಿರುವುದು ಚುನಾವಣಾ ಫಲಿತಾಂಶದಲ್ಲಿ ಗೋಚರಿಸಿತು.
ವಿವಾದಾತ್ಮಕ ಹೇಳಿಕೆ ನೀಡಿದ್ದು ದೊಡ್ಡ ಸಮುದಾಯಗಳ ಮೇಲೆ ಪರಿಣಾಮ ಬೀರಿದ್ದನ್ನು ಅಲ್ಲ ಗೆಳೆಯುವಂತಿಲ್ಲ. ಜತೆಗೆ ನಗರದ ಪ್ರದೇಶದಲ್ಲಿಅಮೃತ್ ಕುಡಿಯುವ ನೀರು ಯೋಜನೆ ಹಾಗೂ ಯುಜಿಡಿ ಯೋಜನೆಗಳು ವಿಫಲವಾಗಿದ್ದು ನಗರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನೆಡೆ ಉಂಟು ಮಾಡಿರುವುದನ್ನು