ಬೆಳಿಗ್ಗೆ 8 ಗಂಟೆಯಾಗುತ್ತಿದ್ದಂತೆ, ನಗರವನ್ನು ಪ್ರವೇಶಿಸುವ ಎಲ್ಲ ರಸ್ತೆಗಳಲ್ಲಿ ಭಾರಿ ಸರಕು ಸಾಗಣೆ ಲಾರಿಗಳನ್ನು ತಡೆದು ನಿಲ್ಲಿಸಲಾಯಿತು. ತುಮಕೂರು ರಸ್ತೆಯಲ್ಲಿ ವಿಡಿಯಾ ಕಾರ್ಖಾನೆಯಿಂದ ನೆಲಮಂಗಲದವರೆಗೆ ಸರಕು ಹೊತ್ತ ನೂರಾರು ಲಾರಿಗಳು ನಗರವನ್ನು ಪ್ರವೇಶಿಸಲು ಕಾದು ನಿಂತಿದ್ದವು. ಉಳಿದ ರಸ್ತೆಗಳಲ್ಲೂ ನೂರಾರು ಲಾರಿಗಳಿದ್ದವು.