Nandini Brand: 'ಅಮೂಲ್' ವಿರುದ್ಧ ಮುಂದುವರಿದ ಸಮರ, ರಾಜ್ಯದ ಅಸ್ಮಿತೆ
Sub: Nandini Brand: ಅಮುಲ್ ಸವಾರಿ ವಿರುದ್ಧ ರಾಜಕೀಯ ನಾಯಕರೂ ಸೇರಿದಂತೆ, ಕನ್ನಡಿಗರು ತೀವ್ರ ಸಮರ ಸಾರಿದ್ದು, ಯಾವುದೇ ಕಾರಣಕ್ಕೂ ಅಮುಲ್ ಹಾಲು ಹಾಗೂ ಹಾಲಿನ ಉತ್ಪನ್ನವನ್ನು ಬೆಂಬಲಿಸದಂತೆ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಯುತ್ತಿದೆ.
ಬೆಂಗಳೂರು: ರಾಜ್ಯದಲ್ಲಿ ಗುಜರಾತ್ನ 'ಅಮೂಲ್' ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಮುಂದುವರಿದಿದ್ದು, ರಾಜಕೀಯ ನೇತಾರರು ಹಾಗೂ ಜನರು ರಾಜ್ಯದ ಅಸ್ಮಿತೆ 'ನಂದಿನಿ' ಬ್ರ್ಯಾಂಡ್ನ ಪರ ಧ್ವನಿ ಎತ್ತಿದ್ದಾರೆ.