ಆರೋಪಿಗಳಾದ ವಿನಯ ಕುಲಕರ್ಣಿ, ಬಸವರಾಜ ಶಿವಪ್ಪ ಮುತ್ತಗಿ, ವಿನಾಯಕ್, ಚಂದ್ರಶೇಖರ ಇಂಡಿ ಮತ್ತು ಸೋಮಶೇಖರ್ ಅರ್ಜಿ ಸಲ್ಲಿಸಿದ್ದರು. ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿ 2019 ಸೆಪ್ಟೆಂಬರ್ 6ರಂದು ಸರ್ಕಾರ ಹೊರಡಿಸಿದ್ದ ಆದೇಶ ಮತ್ತು ಅದನ್ನು ಆಧರಿಸಿ ಸಿಬಿಐ ದಾಖಲಿಸಿಕೊಂಡ ಎಫ್ಐಆರ್ ಅನ್ನು ಅರ್ಜಿದಾರರು ಪ್ರಶ್ನಿಸಿದ್ದರು.