‘KMF ನೇಮಕಾತಿಯಲ್ಲೂ ಹುದ್ದೆಗಳ ಮಾರಾಟ ನಡೆದಿರುವುದು, ಹೈಕೋರ್ಟ್ ನೇಮಕಾತಿಗೆ ತಡೆ ನೀಡಿರುವುದು ಬಿಜೆಪಿಯ ನಿರ್ಲಜ್ಜ ಭ್ರಷ್ಟಾಚಾರಕ್ಕೆ ಸಾಕ್ಷಿ. KMFನ ನೇಮಕಾತಿಯನ್ನು ಗುಜರಾತಿನ ಏಜೆನ್ಸಿಗೆ ನೀಡಿದ್ದು ಏಕೆ? ಈ ಹಗರಣದ ಹಿಂದೆ ಅಮಿತ್ ಶಾ ಅವರ ಒತ್ತಡ ಕೆಲಸ ಮಾಡಿದೆಯೇ?‘ ಎಂದು ಕಾಂಗ್ರೆಸ್ ಟ್ವಿಟರ್ನಲ್ಲಿ ಪ್ರಶ್ನೆ ಮಾಡಿದೆ.
ಇನ್ನು ಹಾವೇರಿಯ ರಟ್ಟಿಹಳ್ಳಿಯಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ಸಂಬಂಧ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಸಿಎಂ ಖಾಲಿ ಕುರ್ಚಿಗೆ ಭಾಷಣ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ‘ ಎಂದು ಟ್ವೀಟ್ ಮಾಡಿದೆ.