‘ಕೆಲವರು ಸುಖಾಸುಮ್ಮನೆ ಇಲ್ಲ ಸಲ್ಲದ ಗಾಳಿ ಸುದ್ದಿಯನ್ನು ಹಬ್ಬಿಸುತ್ತಾರೆ. ನನ್ನ ವಿರುದ್ಧ ವರಿಷ್ಠರಿಗೆ ದೂರು ನೀಡಲು ಸಾಧ್ಯವೇ ಇಲ್ಲ. ಕೇವಲ ರಾಜಕೀಯ ಮಾತ್ರವಲ್ಲ, ಬೇರೆ ಕಾರಣಗಳಿಂದ ನಾನು ತಪ್ಪು ಹೆಜ್ಜೆ ಇಟ್ಟಾಗಲೂ ಬೊಮ್ಮಾಯಿ ತಿಳಿ ಹೇಳುತ್ತಾ ಬಂದಿದ್ದಾರೆ. ಈಗಲೂ ಅಷ್ಟೇ, ಅವರ ಬಗ್ಗೆ ಯಾವುದೇ ನನಗೆ ಅಸಮಾಧಾನವಿಲ್ಲ. ಅದೇ ರೀತಿ ಅವರಿಗೂ ನನ್ನ ಮೇಲೆ ಅಸಮಾಧಾನವಿಲ್ಲ’ ಎಂದರು.