×
ADVERTISEMENT
ಈ ಕ್ಷಣ :
ADVERTISEMENT

Bengaluru-Mysuru Expressway| ಬೈಪಾಸ್‌ ರಸ್ತೆಯಲ್ಲಿ ಸುರಕ್ಷತೆಯೇ ಸವಾಲು

ಬೈಪಾಸ್‌ ರಸ್ತೆಯಲ್ಲಿ ಸುರಕ್ಷತೆಯೇ ಸವಾಲು
Published 10 ಮಾರ್ಚ್ 2023, 11:25 IST
Last Updated 10 ಮಾರ್ಚ್ 2023, 11:25 IST
Comments
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ಮೈಸೂರು ನಡುವಿನ ಹತ್ತು ಪಥಗಳ ಹೆದ್ದಾರಿಯಲ್ಲಿ ಹೊಸದಾಗಿ ನಿರ್ಮಿಸಲಾದ ಬೈಪಾಸ್‌ಗಳಲ್ಲಿ ಸುರಕ್ಷತೆಯೇ ಸವಾಲಾಗಿದೆ.

ಒಟ್ಟು 117 ಕಿ.ಮೀ. ಉದ್ದದ ದಶಪಥ ರಸ್ತೆಯಲ್ಲಿ 52 ಕಿ.ಮೀ. ಉದ್ದದಷ್ಟು ಬೈಪಾಸ್‌ ರಸ್ತೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಇದಲ್ಲದೆ ಕುಂಬಳಗೋಡು ಹಾಗೂ ಮದ್ದೂರು ಪಟ್ಟಣದ ಮೇಲೆ ಎಲಿವೇಟೆಡ್ ಕಾರಿಡಾರ್‌ಗಳು ಹಾದುಹೋಗಿವೆ. ನಗರ–ಹಳ್ಳಿಗಳಿಗೆ ಸಂಪರ್ಕವೇ ಇಲ್ಲದಂತೆ ನಿರ್ಮಿಸಲಾದ ಈ ಹೊಸ ಬೈಪಾಸ್‌ಗಳಲ್ಲಿ ಜನವಸತಿ ವಿರಳವಾಗಿದೆ.

ರಾತ್ರಿ ಹೊತ್ತು ಸಂಚಾರ ಕೈಗೊಳ್ಳಲು ಪ್ರಯಾಣಿಕರು ಹೆದರುತ್ತಿದ್ದಾರೆ. ಕೆಲವು ಕಡೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟುವ ಪ್ರಯತ್ನಗಳೂ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿವೆ. ಮಂಡ್ಯ ಜಿಲ್ಲೆಯ ಹಳೇ ಬೂದನೂರು, ಇಂಡುವಾಳು, ರಾಮನಗರದ ರಾಮದೇವರ ಬೆಟ್ಟ ಮೊದಲಾದ ಕಡೆಗಳಲ್ಲಿ ಕತ್ತಲು ಇರುವ ಕಡೆಗಳಲ್ಲಿ ಈ ರೀತಿಯ ಪ್ರಯತ್ನಗಳು ನಡೆದಿವೆ ಎಂದು ವಾಹನ ಸವಾರರು ದೂರುತ್ತಾರೆ. 

ಸುರಕ್ಷತೆಯ ಕೊರತೆ ಕಾರಣಕ್ಕೆ ಹೊಸ ರಸ್ತೆಗಳಲ್ಲಿ ರಾತ್ರಿ ಹೊತ್ತು ಸಂಚಾರ ಕೈಗೊಳ್ಳಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದು, ಹಳೇ ಹೆದ್ದಾರಿಯತ್ತಲೇ ಮುಖ ಮಾಡುತ್ತಿದ್ದಾರೆ. ಬೈಪಾಸ್‌ಗಳಲ್ಲಿ ಸಂಪೂರ್ಣ ಕತ್ತಲು ಆವರಿಸಿದ್ದು, ಎಲ್ಲಿಯೂ ಬೀದಿದೀಪಗಳ ವ್ಯವಸ್ಥೆ ಇಲ್ಲ. ಹೀಗಾಗಿ ರಾಮನಗರ, ಚನ್ನಪಟ್ಟಣ, ಮಂಡ್ಯದಂತಹ ನಗರಗಳಲ್ಲಿ ಹಳೇ ಹೆದ್ದಾರಿಯಲ್ಲಿ ಹಗಲಿಗಿಂತ ರಾತ್ರಿ
ಹೊತ್ತು ವಾಹನಗಳ ಸಂಚಾರ ಹೆಚ್ಚುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT