ಧಾರವಾಡದ ಎಲುವು-ಕೀಲು ತಜ್ಞ ಡಾ.ಸತೀಶ ಇರಕಲ್ಲ, ಬಳ್ಳೂರಿನ ಶಂಕರಗೌಡ ಫಕ್ಕೀರಗೌಡ್ರ, ಪತ್ರಕರ್ತ ಪ್ರಶಾಂತ ರಾಜಗುರು, ಚೆನ್ನಮ್ಮ ಮಡಿವಾಳರ ಅವರನ್ನು ಸನ್ಮಾನಿಸಲಾಯಿತು. ವೀರೇಶಕುಮಾರ ಮಳಲಿ ಹಾಗೂ ಮಡಿವಾಳಯ್ಯ ಶಹಪೂರಮಠ ಸಂಗೀತ ಸೇವೆ ನೀಡಿದರು. ಸಿಂಚನಾ ಯಡಳ್ಳಿ ಭರತನಾಟ್ಯ ಪ್ರಸ್ತುತ ಪಡಿಸಿದರು. ಅನ್ನಸಂತರ್ಪಣೆ ನಡೆಯಿತು. ವಿಜಯಾನಂದ ಇಟಗಿ, ಗುರುಮೂರ್ತಿ ಯರಗಂಬಳಿಮಠ ಕಾರ್ಯಕ್ರಮ ನಿರ್ವಹಿಸಿದರು.