'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ (Bhagyalakshmi Kannada Serial) ವೈಷ್ಣವ್ನನ್ನು ಲಕ್ಷ್ಮೀ ಮದುವೆಯಾಗಲೇಬೇಕು ಎಂದು ತಾಂಡವ್ ಪಣ ತೊಟ್ಟಿದ್ದಾನೆ. ಇತ್ತ ಕಡೆ ನೀನು ನನ್ನ ಹಿಂದೆ ಬರಬೇಡ ಅಂತ ವೈಷ್ಣವ್ಗೆ ಕೀರ್ತಿ ಹೇಳಿದ್ದಾಳೆ. ಹಾಗಾದರೆ ವೈಷ್ಣವ್ & ಲಕ್ಷ್ಮೀ ಮದುವೆ ಆಗೋದಿಲ್ವಾ?
ಧಾರಾವಾಹಿ ಕಥೆ ಏನು?
ಪ್ರೀತಿಸುತ್ತಿದ್ದ ವೈಷ್ಣವ್, ಕೀರ್ತಿ ನಿಶ್ಚಿತಾರ್ಥ ಇನ್ನೇನು ನಡೆಯತ್ತೆ ಎನ್ನುವಷ್ಟರಲ್ಲಿ ಕೀರ್ತಿ ನಾನು ವೈಷ್ಣವ್ನನ್ನು ಮದುವೆಯಾಗಲಾರೆ ಎಂದು ಹೇಳಿದ್ದಳು. ಆಮೇಲೆ ಮನೆಯವರು ವೈಷ್ಣವ್, ಲಕ್ಷ್ಮೀ ಮದುವೆ ಫಿಕ್ಸ್ ಮಾಡಿದ್ದಾರೆ. ಈಗ ಹಳ್ಳಿಯೊಂದರಲ್ಲಿ ಇವರಿಬ್ಬರ ಮದುವೆ ತಯಾರಿ ನಡೆಯುತ್ತಿದೆ. ವೈಷ್ಣವ್ ಮಾತ್ರ ಕೀರ್ತಿಯನ್ನು ಮದುವೆಯಾಗಬೇಕು ಎಂದುಕೊಂಡಿದ್ದಾನೆ. ಆದರೆ ಕೀರ್ತಿ ವೈಷ್ಣವ್ನನ್ನು ಮದುವೆಯಾಗಲು ರೆಡಿಯಿಲ್ಲ. ಇನ್ನೊಂದು ಕಡೆ ತಾಂಡವ್ ವೈಷ್ಣವ್ ಹಾಗೂ ಲಕ್ಷ್ಮೀ ಮದುವೆ ನಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ.