‘’ದುರ್ದೈವ.. ಭಗವಾನ್ ಅವರು ನಿರ್ಗಮಿಸಿದ್ದಾರೆ. ಎಂತಹ ಸಾಧನೆ ಮಾಡಿ, ಪೂರ್ಣ ಜೀವನ ಜೀವಿಸಿ ನಮ್ಮನ್ನೆಲ್ಲಾ ಅಗಲಿದ್ದಾರೆ. ನನಗಂತೂ ಒಂದು ಯುಗವೇ ಕಳೆದಂತಹ ಅನುಭವ. ಯಾಕಂದ್ರೆ, 1974 ರಿಂದ ಸತತ 50 ವರ್ಷಗಳ ಕಾಲ ಅವರೊಂದಿಗೆ ನನ್ನ ಬಾಂಧವ್ಯವಿತ್ತು. ಇವತ್ತೇ ಅವರ ಜನ್ಮದಿನ ಕೂಡ. ಜನ್ಮದಿನದಂದೇ ನಿಧನರಾಗಿದ್ದಾರೆ. ಪರಮಾತ್ಮನ ಕೈವಾಡವಿಲ್ಲದೆ ಇದು ಸಾಧ್ಯವಿಲ್ಲ. 2000ನೇ ಇಸವಿಯ ಫೆಬ್ರವರಿ 20 ರಂದೇ ಭಗವಾನ್ ಜೊತೆಗಿದ್ದ ದೊರೈರಾಜ್ ಅವರೂ ಕೂಡ ನಿರ್ಗಮಿಸಿದರು. ಇದೂ ಎಂತಹ ಕಾಕತಾಳೀಯ.!’’