ಹೊಸಪೇಟೆ(ವಿಜಯನಗರ): ನಗರದ ಸಿಎಸ್ಐ ಕ್ರೈಸ್ತ ರಾಜ ಸಭೆ ನೂತನ ಪ್ರಾರ್ಥನಾ ಮಂದಿರವನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಉದ್ಘಾಟಿಸಿದರು.
ಪ್ರಾರ್ಥನಾ ಮಂದಿರದ ಜೊತೆಗೆ ನೂತನ 25 ವಾಣಿಜ್ಯ ಮಳಿಗೆಗಳನ್ನು ಸಹ ಉದ್ಘಾಟಿಸಿದರು. ಚಿಕ್ಕ ಮಕ್ಕಳು ದೇವತೆಗಳ ವೇಷಧರಿಸಿ ಪ್ರಾರ್ಥನಾ ಮಂದಿರಕ್ಕೆ ಗಣ್ಯರನ್ನು ಸ್ವಾಗತಿಸಿದರು. ನಂತರ ಪಾದ್ರಿಗಳು ಪ್ರಾರ್ಥನೆ ನೆರವೇರಿಸಿದರು.
ಸಂದೀಪ್ ಸಿಂಗ್, ಧಾರವಾಡ ಕೆಎನ್ಡಿ ಬಿಷಪ್ ಮಾರ್ಟಿನ್, ಕಾರ್ಯದರ್ಶಿ ವಿಜಯಕುಮಾರ್, ಹಿರಿಯ ಸಭಾಪಾಲಕ ರಾಜು, ಪ್ರಾರ್ಥನಾ ಮಂದಿರದ ಕಾರ್ಯದರ್ಶಿ ಅಶೋಕ್ ಕುಮಾರ್, ಶರತ್ ಬಾಬು, ಎ.ಡೇನಿಯಲ್ ಇದ್ದರು.
ನಗರದ ಸಿಎಸ್ಐ ಕ್ರೈಸ್ತ ರಾಜ ಸಭೆ ನೂತನ ಪ್ರಾರ್ಥನಾ ಮಂದಿರವನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಉದ್ಘಾಟಿಸಿದರು.