‘ಜಾತಿವಾರು ಸಮೀಕ್ಷೆಯ ಅಂಕಿ ಅಂಶಗಳನ್ನೆ ಮಾನದಂಡವಾಗಿಟ್ಟುಕೊಂಡು ವಿವಿಧ ಜಾತಿಗಳ ಗುಂಪಿನ ಮೀಸಲಾತಿ ಪ್ರಮಾಣ ಬದಲಾವಣೆ ಮಾಡುವ ಅಧಿಕಾರ ಸರಕಾರಕ್ಕಿದೆಯೆ ಹೊರತು ಚಳವಳಿ, ರಾಜಕೀಯ ಒತ್ತಡಕ್ಕೆ ಮಣಿದು ಹಾಲಿ ಮೀಸಲಾತಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವಂತಿಲ್ಲ. ಅದು ಸಂವಿಧಾನಕ್ಕೆ ವಿರುದ್ಧವಾದುದು’ ಎಂದು ತಿಳಿಸಿದರು.
ಒಕ್ಕೂಟದ ಸಂಚಾಲಕ ವೈ. ಯಮುನೇಶ, ಮುಖಂಡರಾದ ಪ್ರಹ್ಲಾದ ಸ್ವಾಮೀಜಿ, ಗೌಳಿರುದ್ರಪ್ಪ, ವೈ.ಬಿ.ಮಧುಸೂದನ್, ಯು.ಆಂಜನೇಯಲು, ಯು.ಅಶ್ವತಪ್ಪ, ಅಗಳಿ ಭಾಸ್ಕರ್, ಟಿ.ರವಿಕುಮಾರ್, ಭೋಜರಾಜ, ಎ.ಮರಿಯಪ್ಪ, ಕೆ.ಶಿವಾನಂದ, ಸೋಮಣ್ಣ ಯಾದವ್, ಕೆ.ವೀರಣ್ಣ, ಎಂ.ಬಿ.ಗೌಡಣ್ಣನವರ್, ಶ್ರೀನಿವಾಸ್, ತಿಪ್ಪೇಸ್ವಾಮಿ, ಜಿ.ಯಂಕಪ್ಪ, ಚಿಂತಾಮಣಿ, ಸುಭಾಷ್ಚಂದ್ರ, ನಜೀರ್ ಸಾಬ್, ಸೋಮಣ್ಣ, ಬಿ.ಜಹಾಂಗೀರ್, ಮೊಹಮ್ಮದ್ ಗೌಸ್ ಇದ್ದರು.