ಕಾಲ ಬದಲಾದಂತೆ ಭಜನಾ ತಂಡಗಳು, ಭಜನೆ ಮನೆಗಳು ಕಣ್ಮರೆಯಾಗುತ್ತಿವೆ. ಅದಾಗಿಯೂ ಕೆಲವು ಕಡೆ ಭಜನಾ ಕಾರ್ಯಕ್ರಮ ಇಂದಿಗೂ ಆಚರಣೆಗೊಳ್ಳುತ್ತಿದೆ. ನಗರದ ಮಳಗಾಳು ಗ್ರಾಮದಲ್ಲಿ ಮತ್ತು ಪೇಟೆ ಬೀದಿಯ ಕೋದಂಡರಾಮ ಭಜನಾ ಮಂಡಳಿಯವರು ಒಂದು ತಿಂಗಳಿಂದ ಧನುರ್ಮಾಸ ಪೂಜೆಯಲ್ಲಿ ಭಜನೆ ಪ್ರಾರಂಭಿಸಿ ಸಂಕ್ರಾಂತಿ ಹಬ್ಬಕ್ಕೆ ಮುಕ್ತಾಯಗೊಳಿಸಿದರು.