ಪ್ರತಿವರ್ಷದಂತೆ ವಹಿವಾಟು ಜೋರಾಗಿ ಇರಲಿಲ್ಲ. ಆದರೆ ಸಂಪ್ರದಾಯ ಪಾಲನೆಗೆ ಪ್ರಾಮುಖ್ಯತೆ ನೀಡುವವರ ಮಾರುಕಟ್ಟೆಯಲ್ಲಿ ನೆರೆದಿದ್ದರು. ಸರಾಫ್ ಬಜಾರ್ ಮಾರ್ಗ, ಭಂಗಿಕುಂಟಾ ರಸ್ತೆ, ಚಂಧ್ರಮೌಳೇಶ್ವರ ವೃತ್ತ, ಗಂಜ್ ರಸ್ತೆ, ಮಹಾವೀರ ವೃತ್ತ, ತೀನ್ ಕಂದಿಲ್ ಹಾಗೂ ಉಸ್ಮಾನಿಯಾ ಮಾರುಕಟ್ಟೆ ಎದುರಿನ ರಸ್ತೆಗಳಲ್ಲಿ ಹೂವು, ಹಣ್ಣುಗಳನ್ನು ಮಾರಾಟ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.