ವಾನರ ವೀರರಲ್ಲಿ ಒಬ್ಬರಾದ ಹನುಮಂತನು ಅಂಜನಾದ್ರಿಯಲ್ಲಿಯೇ ಜನಿಸಿದ ಎನ್ನಲು ಕೆಲವು ಸಾಹಿತ್ಯಕ ಉಲ್ಲೇಖಗಳು, ಶಿಲಾಶಾಸನಗಳು, ಐತಿಹ್ಯಗಳು, ಗವಿಚಿತ್ರಗಳು, ಪ್ರಾಚ್ಯಾವಶೇಷಗಳು ಪುರಾವೆಗಳಾಗಿವೆ. ಅಂಜನಹಳ್ಳಿ, ಹನುಮನಹಳ್ಳಿ, ಆಂಜನೇಯ ದೇವಾಲಯಗಳು, ಅಪಾರ ಶಿಲ್ಪಗಳು ಇದಕ್ಕೆಲ್ಲಾ ಸಾಕ್ಷಿಯಾಗಿವೆ. ಹಾಗಾಗಿ ತಿರುಪತಿ-ತಿರುಮಲ ಬೆಟ್ಟವೇ ಅಂಜನಾದ್ರಿ ಎಂಬ ವಾದ ಅಸಂಬದ್ಧವಾದದ್ದು ಎಂದು ಪ್ರತಿಪಾದಿಸಿದರು.