70 ವರ್ಷಗಳಿಂದ ಎಸ್ಪಿ ಕಚೇರಿ ಇಲ್ಲಿಯೇ ಇದೆ. ಕೋಲಾರ, ಮುಳಬಾಗಲು, ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು ತಾಲ್ಲೂಕುಗಳ ಮೂಲದ ಸಿಬ್ಬಂದಿ ಇಲ್ಲಿ ಇದ್ದಾರೆ. ಸುಮಾರು 200 ಕುಟುಂಬಗಳು ಇವೆ. ಈಗಾಗಲೇ ಮಕ್ಕಳನ್ನು ಶಾಲೆಗೆ ಸೇರಿಸಿದ್ದೇವೆ. ಈಗ ಅವರನ್ನು ವಿಜಯನಗರ ಜಿಲ್ಲೆಗೆ ಕರೆದುಕೊಂಡು ಹೋಗಿ ಎಂದರೆ ಹೇಗೆ ಹೋಗುವುದು. ಬರುವ ಸಂಬಳದಲ್ಲಿ ಮತ್ತೊಮ್ಮೆ ಶಾಲೆಗೆ ಹೇಗೆ ಸೇರಿಸುವುದು. ಆರ್ಥಿಕ ನಷ್ಟವನ್ನು ಭರಿಸುವುದು ಅಸಾಧ್ಯವಾಗಿದೆ ಎಂದು ಅಳಲು ತೋಡಿಕೊಂಡರು.