‘ಪರೀಕ್ಷೆ ತೇರ್ಗಡೆಯಾಗಲು ಶಾಲೆಯ ಶಿಕ್ಷಕರು ನೀಡಿದ ಮಾರ್ಗದರ್ಶನ, ತರಬೇತಿ ಸಹಕಾರಿಯಾಯಿತು. ಪೋಷಕರ ಸಹಕಾರ ಮರೆಯುವಂತಿಲ್ಲ. ವಿದ್ಯಾರ್ಥಿ ವೇತನದಲ್ಲಿ ಪಠ್ಯಕ್ಕೆ ಪೂರಕವಾದ ಪುಸ್ತಕ ಖರೀದಿಸುತ್ತಿ ದ್ದೇನೆ. ಈ ವರ್ಷ ಎನ್ಟಿಎಸ್ಇ (ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ) ತೆಗೆದುಕೊಳ್ಳುತ್ತೇನೆ. ಅದರಲ್ಲಿ ಅರ್ಹತೆ ಪಡೆದರೆ ಪದವಿವರೆಗೆ ವಿದ್ಯಾರ್ಥಿ ವೇತನ ಬರುತ್ತದೆ. ಪದವಿ ತೇರ್ಗಡೆಯಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಪೊಲೀಸ್ ಅಧಿಕಾರಿಯಾಗುವ ಆಶಯ ಇದೆ’ ಎಂದು ಐಶ್ವರ್ಯಾ ತಿಳಿಸಿದರು.