ಅಪ್ಪನ ನೆನಪುಗಳನ್ನು ಹಂಚಿಕೊಂಡ ಗೋವಿಂದರಾವ್ ಅವರ ಇನ್ನೊಬ್ಬ ಪುತ್ರಿ ಶಾಂತಿ ‘ಅಪ್ಪ ಜೀವನದುದ್ದಕ್ಕೂ ಹೇಗೆ ಬದುಕಿದರೊ; ಕೊನೆಯ ದಿನಗಳಲ್ಲಿಯೂ ಹಾಗೆಯೇ ಬದುಕು ಕಳೆದರು. ಬದುಕಿದ್ದಾಗ ಅವರು ಯಾರಿಗೂ ತೊಂದರೆಯಾಗಬಾರದು ಎಂದು ಬಯಸಿದ್ದರು. ಹೀಗಾಗಿ ತಮ್ಮ ಕೊನೆಯ ದಿನಗಳಲ್ಲಿ ಯಾರಿಗೂ ತೊಂದರೆ ಕೊಡಲಿಲ್ಲ. ಯಾರಿಗೂ ಭಾರವಾಗಲಿಲ್ಲ’ ಎಂದು ಕಣ್ಣೀರಾದರು.