ಹುಬ್ಬಳ್ಳಿ: ಗೋಕುಲ ರಸ್ತೆಯ ದಾರಾವತಿ ಹನುಮಂತ ದೇವಸ್ಥಾನದ ಕಳಸಾರೋಹಣ, ಕಲ್ಯಾಣ ಮಂಟಪ ಉದ್ಘಾಟನೆ ಅಂಗವಾಗಿ ಇಂದು(ಭಾನುವಾರ) ದೇವಸ್ಥಾನ ಸಮಿತಿ ಗೋಕುಲ ಗ್ರಾಮದಲ್ಲಿ ರಾಜ್ಯ ಮಟ್ಟದ ಖಾಲಿ ಗಾಡಾ(ಚಕ್ಕಡಿ ಬಂಡಿ) ಓಡಿಸುವ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಮಹಾರಾಷ್ಟ್ರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಧಾರವಾಡ ಸೇರಿದಂತೆ 100ಕ್ಕೂ ಹೆಚ್ಚು ಜೋಡೆತ್ತುಗಳು ಚಕ್ಕಡಿ ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ.