ಗಣ್ಯರು ಹಾಗೂ ಅಧಿಕಾರಿಗಳು ಚೌಡಯ್ಯ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕಿ ನಂದಾ ಹಣಬರಟ್ಟಿ, ಗಂಗಾಮತಸ್ಥ ಹಿತರಕ್ಷಣಾ ಸಂಘದ ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಕುಮಾರ ಬೆಸ್ತ, ಸಮಾಜದ ಮುಖಂಡರಾದ ಎಸ್.ಟಿ. ದೊಡ್ಡಮನಿ, ನಾಗರಾಜ ಅಂಬಿಗೇರ, ಕುರಿಯವರ, ಯಲ್ಲಪ್ಪ ಅಳಗವಾಡಿ, ಮಂಜುನಾಥ ಭೈರಣ್ಣವರ, ಶಿವಾನಂದ ಅಂಬೀಗೇರ, ಶಿವಾನಂದ ಬಾರಕೇರ ಹಾಗೂ ಕಲ್ಲಣಗೌಡ ಭರಮಗೌಡರ ಇದ್ದರು.