ಒಟ್ಟಾರೆಯಾಗಿ, ಸಿದ್ದರಾಮಯ್ಯನವರ ಮನಸ್ಸಿನಲ್ಲಿ ಏನೋ ದುಗುಡ ಇದ್ದಂತಿತ್ತು. ಸಾಮಾನ್ಯವಾಗಿ ಅವರು ಹಾಗೆ ಇರುವಂಥವರಲ್ಲ. ತುಂಬಾ ಎಕ್ಸ್ ಪ್ರೆಸ್ಸಿವ್ ಅವರು. ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವಂಥವರು, ಮುಕ್ತವಾಗಿ ಮಾತನಾಡುವಂಥವರು. ಆದರೂ, ಸಿದ್ದರಾಮಯ್ಯನವರ ಮನಸ್ಸಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಅಷ್ಟಾಗಿ ತೃಪ್ತಿಕೊಟ್ಟಿಲ್ಲ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.