ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿದ ಅವರು,‘ನಗರದ ಕೊಂಗಳ ಕೆರೆ, ಚಿಕ್ಕರಂಗನಾಥನ ಕೆರೆ, ಮುಡಿಗುಂಡ ಕೆರೆ ಹಾಗೂ ಹೊಂಗನೂರು ಹಿರೆಕೆರೆ ಕಾಮಗಾರಿಗಳು ಸರಿಯಾಗಿ ಒತ್ತುವರಿ ತೆರವು ಆಗಿಲ್ಲ, ಹಾಗಾಗಿ ಕಾಮಗಾರಿಯನ್ನು ತೆರವು ಮಾಡದೆ ಮಾಡುತ್ತಿದ್ದಾರೆ. ಕಾಮಗಾರಿಗಳಿಗೆ ಅನುದಾನ ಕೊರತೆ ಇದೆ. ಅನುದಾನ ಕೂಡಲೇ ಬಿಡುಗಡೆ ಮಾಡಿ’ ಎಂದು ಮನವಿ ಮಾಡಿದರು.