‘ಸುಲ್ತಾನ್ ಪಾಳ್ಯ ಬಳಿ ಇರುವ ರಾಮಕೃಷ್ಣ ವಸತಿ ಸಮುಚ್ಚಯದಲ್ಲಿ ರಾಜು ಅವರು ಬುಧವಾರ ಬೆಳಿಗ್ಗೆ ಸಂಪ್ ಸ್ವಚ್ಛಗೊಳಿಸಲು ತೆರಳಿದ್ದರು. ಜೊತೆಗೆ ಮಗನನ್ನೂ ಕರೆದುಕೊಂಡು ಹೋಗಿದ್ದರು. ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತಂದೆಯ ಚೀರಾಟ ಕಂಡ ಸಾಯಿ, ಅವರ ಬಳಿ ಓಡಿ ಹೋಗಿದ್ದಾನೆ. ಈ ವೇಳೆ ಆತನಿಗೂ ವಿದ್ಯುತ್ ತಗುಲಿದೆ’ ಎಂದು ಪೊಲೀಸರು ಹೇಳಿದ್ದಾರೆ.